ಗೂಡು ಕಟ್ಟಿದ ಹಕ್ಕಿ

ಗೂಡು ಕಟ್ಟಿದ ಹಕ್ಕಿ
ತೊರೆದು ಹೋಯಿತಲ್ಲೊ
ಹಾಡು ಮಾಡಿದ ಕೊಳಲ
ಮುರಿದು ಹೋಯಿತಲ್ಲೊ || ಪ ||

ಬಿರುಬಿಸಿಲಿನ ಬನಕೆ
ಹಸಿರಾಗುವೆನೆಂದು
ಬಿರಿದು ನಿಂತ ನೆಲಕೆ
ಮಳೆಯಾಗಿ ಬರುವೆನೆಂದು
ನುಡಿದು ಹೋದ ಮಾತು
ಅದರೊಡನೆ ಹೋಯಿತಲ್ಲೊ

ಬಳಲಿ ಬೆಂದ ಬದುಕು
ಮುಂಗಾರು ಕಾಣುವಂತೆ
ಒಣಗಿ ನಿಂತ ನೆಲವು
ಹೊಸ ಹಸಿರು ಪಡೆಯುವಂತೆ
ಜೀವ ಪಡೆಯುವಾಗ
ಕತ್ತರಿಸಿ ಹೋಯಿತಲ್ಲೊ

ಬೇಡವಾದ ಬದುಕು
ಮಸಣದಾಟ ಕೂಟ
ಮುರಿದು ಬಿದ್ದ ಜಂತಿ
ಯಾರಿಗೂ ಬೇಡ ನೋಟ
ಸಾವಿಗೂ ಇಲ್ಲಿ ಕರುಣೆ
ಇಲ್ಲವಾಯಿತಲ್ಲೊ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀಪ
Next post ವಾರಿ ರುಮ್ಮಾಲ ಸುತ್ತಿ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys